ಕಥೆ -೧
ಪ್ರಪಾತದ ಅಂಚಿನಲ್ಲಿ ಸಾಗುವ ಆನೆಯೊಂದು ಕಾಲುಜಾರಿ ಪ್ರಪಾತಕ್ಕೆ ಬೀಳುವಾಗ ಅದರಿಂದ ಹೊರಡುವ ಆರ್ಥನಾದವನ್ನು ಕೇಳಿ ಸಂತೋಷಪಡುವ ರಾಜ ಎಷ್ಟು ಕ್ರೂರಿಯಾಗಿರಬಹುದು? ಆ ಆರ್ಥನಾದವನ್ನು ಮತ್ತೆ ಮತ್ತೆ ಅನುಬವಿಸಿ ಆನಂದಿಸಲು ತನ್ನ ಸೈನ್ಯದ ಉಳಿದ ಆನೆಗಳನ್ನೂ ಹಾಗೆಯೇ ಪ್ರಪಾತಕ್ಕೆ ನೂಕಿದನೆಂದರೆ? ಆದರೆ ಆತನ ಜೀವನ ಈ ಕ್ರೂರತೆಗೆ ವೈರುಧ್ಯವಾಗಿದ್ದರೆ? ಚರಿತ್ರೆಯ ವಿವರಗಳು ಎಲ್ಲೋ ಕೈ ತಪ್ಪಿವೆ ಎಂದಲ್ಲವೆ?
ಕಥೆ -೨
ಭಾರತದ ‘ಗ್ರಾಂಡ್ ಕ್ಯಾನ್ಯಾನ್’ ಎಂದೆ ಹೆಸರುವಾಸಿಯಾಗಿರುವ ಗಂಡೀಕೋಟೆಯಲ್ಲಿ ನಡೆದ, ಚರಿತ್ರೆಯಲ್ಲಿ ಅಡಗಿ ಕುಳಿತಿರುವ ಒಂದು ದುರಂತ ಕಥೆ
ಕಥೆ -೩
ಸಮಾಜದಲ್ಲಿ ಅಸಮಾನತೆಯನ್ನು ನಿರ್ಮೂಲ ಮಾಡಲು ಸಾಧ್ಯವೆ? ಒಂದು ರೀತಿಯ ಅಸಮಾನತೆಯನ್ನು ದಿಕ್ಕರಿಸಿದಾಗ ಮತ್ತೊಂದು ಹೆಡೆ ಎತ್ತಿ ಬುಸುಗುಟ್ಟುವುದನ್ನು ಚರಿತ್ರೆಯುದ್ದಕ್ಕೂ ಕಾಣಬಹುದು. ಹಾಗೆಯೆ ಕಲೆ ಮತ್ತು ಸಂಸ್ಕೃತಿಯಲ್ಲಿ ಬೇರೂರಿರುವ ಅಸಮಾನತೆಗಳೂ ಕೂಡ.
ಈ ವಿಷಯಗಳ ಸುತ್ತ ಹೆಣೆದ ಕತೆಗಳ ಸಂಗ್ರಹ ಮಿಹಿರಾಕುಲ