ಬಳ್ಳಿಕಾಳಬೆಳ್ಳಿ (ಕಾದಂಬರಿ)

ಬಳ್ಳಿಕಾಳಬೆಳ್ಳಿ (ಕಾದಂಬರಿ)

ಎರಡನೆ ಮಹಾಯುದ್ದದಲ್ಲಿ ಭಾರತದಿಂದ ಹೊರಟ  ಗೇರುಸೊಪ್ಪ ಎಂಬ ಹಡುಗು, ಜರ್ಮನಿಯ ನೌಕಾದಾಳಿಗೆ ಸಿಕ್ಕಿ ಮುಳುಗಿ ಹೋಗುತ್ತದೆ. ಹಲವಾರು ದಶಕಗಳ ನಂತರ ಅದನ್ನು ಹುಡುಕಿ ತೆಗೆದ ಸಂಸ್ತೆಯೊಂದು ಅದರೊಳಗಿನ ಬೆಳ್ಳಿಯನ್ನು ಕೋಟಿ ಕೋಟಿ ಡಾಲರ್ ಗಳಿಗೆ ಮಾರಾಟ ಮಾಡುತ್ತದೆ. ಈ ಬೆಳ್ಳಿಯನ್ನು ಭಾರತದ ಯಾವ ಬಾಗದಿಂದ ರವಾನಿಸಲಾಗಿತ್ತು? ಆ ಹಡಗಿಗೆ   ಗೇರುಸೊಪ್ಪ  ಎಂದು ಹೆಸರಿಡಲು ಕಾರಣ?

ಕರ್ನಾಟಕದ ಕರಾವಳಿಯ ಇತಿಹಾಸದಲ್ಲಿ ಕಾಣೆಯಾಗಿರುವ ಪುಟಗಳತ್ತ ಕೈತೋರುವ ಈ ಕಾದಂಬರಿ, ಜೈನ ಧರ್ಮದ ವೀರ ರಾಣಿ ಚೆನ್ನಬೈರಾದೇವಿಯ ಜೀವನವನ್ನು ಚಿತ್ರಿಸುತ್ತದೆ. ಐವತ್ತು ವರ್ಷಗಳ ಕಾಲದ ದೀರ್ಘ ಆಡಳಿತ ನಡೆಸಿದ ಆಕೆ ಪಾಶ್ಚಾತ್ಯರನ್ನು ಭಾರತದಿಂದ ಹೊರಗಿಡಲು ನಡೆಸಿದ ಹೋರಾಟಗಳ ಬಗ್ಗೆ ವಿವರಗಳನ್ನು ನೀಡುತ್ತದೆ.