ಕಲ್ದವಸಿ (ಕಥಾ ಸಂಕಲನ)

ಕಲ್ದವಸಿ (ಕಥಾ ಸಂಕಲನ)

ಕಥೆ-೧

ಕೃಷ್ಣಾ ನದಿಯ ಕಣಿವೆಯಲ್ಲಿ ಕ್ರಿ. ಪೂ. ೩ನೆ ಶತಮಾನದಿಂದ ಪ್ರಾರಂಭವಾದ ಶಾತವಾಹನರ ರಾಜರು ಬಹುಪಾಲು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದರು. ಆದರೆ ಅವರ ಬಹುತೇಕ ರಾಣಿಯರೇಕೆ ಜೈನ ಧರ್ಮವನ್ನು ಅಪ್ಪಿಕೊಂಡಿದ್ದರು? ಇನ್ನು ಈ ಶಾಲಿವಾಹನರ ರಾಜಕುಮಾರರೇಕೆ ತಮ್ಮ ತಂದೆಯ ಹೆಸರನ್ನು ಬಿಟ್ಟು ತಾಯಿಯ ಹೆಸರನ್ನು ಪಡೆಯುತ್ತಿದ್ದರು?

ಕಥೆ -೨

ನಶಿಸಿಹೋಗುತ್ತಿರುವ ಭಾಷೆಗಳನ್ನು, ಜೀವ ವೈವಿದ್ಯತೆಯನ್ನು, ಚರಿತ್ರೆಯ ಸ್ತಾವರಗಳನ್ನು ಹಾಗೂ ಸಂಸ್ಕೃತಿ ಮುಂತಾದುವನ್ನು ಗುರುತಿಸಿ ಅವುಗಳ ಸಂರಕ್ಷಣೆಗೆ ಮುಂದಾಗುವ ನಮ್ಮ ಆಡಳಿತ ವ್ಯವಸ್ಥೆ ಯಾವುದೇ  ಧರ್ಮವು ನಶಿಸಿಹೋಗುತ್ತಿದ್ದರೆ ಅದನ್ನೂ ಅಷ್ಟೆ ಆಸ್ತೆಯಿಂದ ಕಾಪಾಡಬೇಕಲ್ಲವೆ? ವಿಚಿತ್ರವೆಂದರೆ ನಮ್ಮ ವ್ಯವಸ್ಥೆ ಅಂಥಹ ಕರ್ತವ್ಯವನ್ನು ಹೆಗಲಿಗೇರಿಸುವ ಬದಲು, ನಶಿಸಿಹೋಗುವ ಧರ್ಮದ ರಕ್ಷಣೆಗೆಂದು ಎದ್ದು ನಿಂತವರತ್ತ ಕೆಂಗಣ್ಣು ಬೀರುತ್ತದೆ. ಈ ಅಸಮಾನ ದೃಷ್ಟಿಗೆ ನಮ್ಮ ಸಂವಿದಾನವನ್ನು ಮುಂದಿಕ್ಕುವ ವಾದವನ್ನು ಈ ಕತೆ ಪ್ರಶ್ನಿಸುತ್ತದೆ.

ಕಥೆ -೩

ಕುವೆಂಪು ಅವರು ತಮ್ಮ ರಾಮಾಯಣವನ್ನು ರಚಿಸುವಾಗ ಊರ್ಮಿಳೆಯ ಪಾತ್ರಕ್ಕೇಕೆ ಅಷ್ಟೊಂದು ಮಿಡಿದಿದ್ದರು? ಊರ್ಮಿಳೆಯಂತದೇ  ಜೀವನ ಸಾಗಿಸುತ್ತಿದ್ದ ಒಬ್ಬ ಸರಳ ಹೆಣ್ಣಿನ ವಾದದಿಂದ ಅವರು ಪ್ರಭಾವಿತಗೊಂಡಿದ್ದರೆ?

ಇವು ಇಲ್ಲಿನ ಕತೆಗಳ ವಸ್ತು.